ಗ್ರಾಮ ಪಂಚಾಯಿತಗಳಲ್ಲಿ ಶೇ.80 ರಷ್ಟು ಸ್ಥಾನ ಗೆಲ್ಲಬೇಕಿದೆ:ಡಿಸಿಎಂ ಲಕ್ಷ್ಮಣ ಸವದಿ

  • 14 Jan 2024 , 11:03 PM
  • Belagavi
  • 96

ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಿ ಪರೋಕ್ಷವಾಗಿ ಬೆಂಬಲ ನೀಡಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.ಕುಂದಾನಗರಿ ಬೆಳಗಾವಿಯ ಗಾಂಧಿ ಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯಿತಗಳಲ್ಲಿ ಶೇ.80 ರಷ್ಟು ಸ್ಥಾನ ಗೆಲ್ಲಬೇಕಿದೆ ಈ ಕಾರ್ಯಕಾರಿಣಿ ಸಭೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ಗೋಹತ್ಯೆ ನಿಷೇಧ, ಲವ್ ಜಿಹಾದ್ ನಿಷೇಧ ಬಗ್ಗೆ ನಮ್ಮ ಕಾರ್ಯ ಕಾರಿಣಿ ಸಭೆಯಲ್ಲಿ ನಿರ್ಣಯ ಆಗಿರುತ್ತದೆ. ನಾಳೆ ಬರುವ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಈ ಕಾನೂನು ಮಂಡನೆ ಆಗುತ್ತೆ ಎಂದು ತಿಳಸಿದರು.

ಇವತ್ತು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಬಂದ ಯಶಸ್ವಿ ಆಗಿಲ್ಲ ಅದರಲ್ಲು ಹಲವು ಕನ್ನಡಪರ ಸಂಘಟನೆಗಳು ನಮ್ಮ ಮಾತಿಗೆ ನೀಡಿ ಪ್ರತಿಭಟನೆ ಹಿಂದೆ ತೆಗೆದುಕೊಂಡಿವೆ. ಬಿಜೆಪಿ ಮೇಲೆ ಜನರ ಸಂಪುರ್ಣ ವಿಶ್ವಾಸವಿದೆ ಎಂದು ಭರವಸೆ ನೀಡಿದರು.

Read All News