ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಿ ಪರೋಕ್ಷವಾಗಿ ಬೆಂಬಲ ನೀಡಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.ಕುಂದಾನಗರಿ ಬೆಳಗಾವಿಯ ಗಾಂಧಿ ಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯಿತಗಳಲ್ಲಿ ಶೇ.80 ರಷ್ಟು ಸ್ಥಾನ ಗೆಲ್ಲಬೇಕಿದೆ ಈ ಕಾರ್ಯಕಾರಿಣಿ ಸಭೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ಗೋಹತ್ಯೆ ನಿಷೇಧ, ಲವ್ ಜಿಹಾದ್ ನಿಷೇಧ ಬಗ್ಗೆ ನಮ್ಮ ಕಾರ್ಯ ಕಾರಿಣಿ ಸಭೆಯಲ್ಲಿ ನಿರ್ಣಯ ಆಗಿರುತ್ತದೆ. ನಾಳೆ ಬರುವ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಈ ಕಾನೂನು ಮಂಡನೆ ಆಗುತ್ತೆ ಎಂದು ತಿಳಸಿದರು.
ಗ್ರಾಮ ಪಂಚಾಯಿತಗಳಲ್ಲಿ ಶೇ.80 ರಷ್ಟು ಸ್ಥಾನ ಗೆಲ್ಲಬೇಕಿದೆ:ಡಿಸಿಎಂ ಲಕ್ಷ್ಮಣ ಸವದಿ pic.twitter.com/R0ho61NKOp
— localview.in (@LocalviewIn) December 5, 2020
ಇವತ್ತು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಬಂದ ಯಶಸ್ವಿ ಆಗಿಲ್ಲ ಅದರಲ್ಲು ಹಲವು ಕನ್ನಡಪರ ಸಂಘಟನೆಗಳು ನಮ್ಮ ಮಾತಿಗೆ ನೀಡಿ ಪ್ರತಿಭಟನೆ ಹಿಂದೆ ತೆಗೆದುಕೊಂಡಿವೆ. ಬಿಜೆಪಿ ಮೇಲೆ ಜನರ ಸಂಪುರ್ಣ ವಿಶ್ವಾಸವಿದೆ ಎಂದು ಭರವಸೆ ನೀಡಿದರು.