ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್ ಸಮೀಪದ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಅವಿರೋದವಾಗಿ ಆಯ್ಕೆಯಾಗಿರುವ ಗೋಕಾಕ ತಾಲೂಕಿನ ಶಿವಾಪುರ ಗ್ರಾಮದ ಬಿ.ಬಿ.ಪಾಟೀಲ ಇವರಿಗೆ ಹಿಡಕಲ್ ಡ್ಯಾಮಿನ ಸಮಾಜ ಸೇವಕರಾದ ಎಂ.ಬಿ.ಕಮತೆ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹುಕ್ಕೇರಿ ಘಟಕದ, ಅಧ್ಯಕ್ಷ ಪ್ರಕಾಶ ಹೊಸಮನಿ ಅವರು ರವಿವಾರ ದಿ.6 ರಂದು ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಇನ್ನೋರ್ವ ನಿರ್ದೇಶಕ ಗುರು.ಮ.ಪಾಟೀಲ ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ತಾಲೂಕಾ ಕಾರ್ಯದರ್ಶಿ ದೀಪಕ ನಾಡಗೌಡ, ಎ.ಎಂ.ಕರ್ನಾಚಿ, ರಮೇಶ ನಾಯಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.