ಹುಕ್ಕೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ಹುಕ್ಕೇರಿ) ಹಿಡಕಲ್ ಡ್ಯಾಮ್ ವಲಯದ ವತಿಯಿಂದ ವಿಕಲ ಚೇತನರಾದ ಸುರೇಶ ಶಂಕರ ಹೂಲಿಕಟ್ಟಿ ಇವರಿಗೆ ವ್ಹಿಲ್ ಚೇರ್ವನ್ನು ವಿತರಿಸುವುದರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇವರ ವತಿಯಿಂದ ಪ್ರತಿ ತಿಂಗಳು 750 ರೂ ಮಾಸಾಶನ ನೀಡಲಾಗುತ್ತಿದೆ. ಹಿಡಕಲ್ ಡ್ಯಾಮ್ ವಲಯದ ಮೇಲ್ವಿಚಾರಕಿ ಶಾಂತಲಾ ಮತ್ತು ಸೇವಾ ಪ್ರತಿನಿಧಿ ರಾಜಶ್ರೀ ಕೃಷ್ಣಾ ಮೇಲಗೇರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.