ರಕ್ತ ಪತ್ರದ ಚಳುವಳಿ ಮಾಡಿದ ದಲಿತ ಸಂಘಟನೆಗಳು
- 17 Dec 2023 , 10:40 PM
- Belagavi
- 116
ಬೆಳಗಾವಿ: ಗೋಕಾಕ ಪಟ್ಟಣದಲ್ಲಿ ಸುಪ್ರೀಂ ಕೋರ್ಟು ಆದೇಶದ ಪ್ರಕಾರ 4 ಜಾತಿಗಳನ್ನು ಪರಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ದಲಿತ ಸಂಘಟನೆಗಳು ರಕ್ತ ಪತ್ರದ ಚಳುವಳಿ ಮಾಡಿದ್ದಾರೆ. ನಾಲ್ಕು ಜಾತಿಗಳಾದ ಲಂಬಾಣಿ, ಕೊರಮ, ಕೊಂಚ ಭೋವಿ, ಈ ಜಾತಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪರಿಷಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ರಕ್ತದಿಂದ ಪತ್ರ ಬರೆಯುವ ಮೂಲಕ ಮುಖ್ಯ ಮಂತ್ರಿ ಯಡಿಯರಪ್ಪನವರಿಗೇ ಮನವಿ ಮಾಡಿದ್ದಾರೆ. ಒಂದು ವೇಳೆ ಇದನ್ನು ಕಡೆಗಣಿಸಿದರೆ ಮುಂದೆ ಬರುವ ದಿನಗಳಲ್ಲಿ ಉಗ್ರ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದು. ನಾವು ನಮ್ಮ ಪ್ರಾಣ ಕೊಟ್ಟೆವು ಆದರೆ ನಮ್ಮ ಹಕ್ಕು ಬಿಡಲಾರೆವು ಎಂದು ಘೋಷಣೆ ಕೂಗಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ದಲಿತ ಸಂಘಟನೆ ಗಳು ಹಾಗೂ ಮಾದಿಗ ಮೀಸಲಾತಿ ಸಮಿತಿ ವತಿಯಿಂದ ಬುಧವಾರ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.