ಹೆಬ್ಬಾಳ್ಕರ್ ಹೇಳಿಕೆಗೆ ನೋ ಕಮೆಂಟ್ ಎಂದ ಸಚಿವ ಜಾರಕಿಹೊಳಿ

  • 18 Dec 2023 , 12:45 AM
  • Belagavi
  • 85

ಬೆಳಗಾವಿ :ಗ್ರಾಮೀಣ ಮತಕ್ಷೇತ್ರದ ಶಾಸಕಿ ಇತ್ತೀಚೆಗೆ "ಹಿರೇಬಾಗೇವಾಡಿಯಲ್ಲಿನೂರುಜನಜಾರಕಿಹೊಳಿಬಂದರೂನನ್ನನ್ನುಏನುಮಾಡಲುಸಾಧ್ಯವಿಲ್ಲಎಂಬಮಾಧ್ಯಮದವರಪ್ರಶ್ನೆಗೆನೋಕಮೆಂಟ್" ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಅವರು ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.

ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವುದರಿಂದ ಅಲ್ಲಿಂದ ಬರುವ ಜನರ ಮೇಲೆ ನಿಗಾ ಇಡಲಾಗುವುದು ಎಂದು ಜಿಲ್ಲಾ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿದೆ.

ಸಾರ್ವಜನಿಕರು ಮೈ ಮರೆಯುವುದು ಬೇಡ. ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದರು. ಮಹಾರಾಷ್ಟ್ರದ ಸರಕಾರದ ಜತೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಸಸಜ್ಜಿತವಾದ ತಪಾಸಣೆ ನಡೆಸಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ.

ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಸಾಕು ಎಂದು ಹೇಳಿದರು. ಬರುವ ಅಧಿವೇಶನದಲ್ಲಿ ಗೋಕಾಕ ಜಿಲ್ಲೆಯನ್ನಾಗಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲ ಮೀತಿಯಲ್ಲಿ ನೋಡಿ ಧ್ವನಿ ಎತ್ತಲಾಗುವುದು ಎಂದು ಹೇಳಿದುರು.

Read All News