ಬೆಳಗಾವಿ: ಲೊಕಸಭಾ ಉಪ ಚುನಾವಣೆ ಪ್ರಚಾರಕ್ಕೆ ಹುಬ್ಬಳ್ಳಿಯಿಂದ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸಂಜೆ ನಗರದ ಹೊರಭಾಗದಲ್ಲಿದ್ದ ಮುತ್ನಾಳದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಹೀರೆಮಠಕ್ಕೆ ಹಾಗೂ ಹಲಗಾ ಜೈನ ಮಂದಿರದ ಬಾಲಾಚಾರ್ಯ 108 ಸಿದ್ದಸೇನಾ ಮಹಾರಾಜರ ಮಠ ಮಾನ್ಯಗಳಿಗೆ ಬೆಟ್ಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂಜ್ಯರ ಆರ್ಶಿವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಆಹಾರ ನಾಗರಿಕಾ ಸಚಿವ ಉಮೇಶ ಕತ್ತಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ,ಅಭ್ಯರ್ಥಿ ಮಂಗಲಾ ಅಂಗಡಿ, ಭಾರತಿ ಮಗದುಮ್ಮ, ಶಂಕರಗೌಡ ಪಾಟೀಲ,ಧನಂಜಯ ಜಾಧವ, ಘೂಳಪ್ಪ ಹೊಸಮನಿ, ಎಫ್.ಎಸ್.ಸಿದ್ದನಗೌಡರ,ಅಭಯ ಅವಲಕ್ಕಿ, ಚೇತನ ಅಂಗಡಿ, ವಿಶಾಲ ಪಾಟೀಲ ಮುಂತಾದವರು ಇದ್ದರು