ಬೆಂಗಳೂರು : ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಪ್ರದೇಶಗಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.
ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು. ಮಧ್ಯಾಹ್ನದ ನಂತರ ಮಳೆಯ ಬೀಳುವ ಸಾಧ್ಯತೆ ಇರುವುದರಿಂದ. ಜನರು ತಮ್ಮ ಕೃಷಿ ಚಟುವಟಿಕೆಗಳನ್ನು ಆದಷ್ಟು ಬೆಳಗಿನ ಸಮಯದಲ್ಲಿ ಕೈಗೊಂಡು, ಕೊಯ್ಲಾದ ಬೆಳೆಗಳನ್ನು ಮಧ್ಯಾಹ್ನದ ನಂತರ ಆದಷ್ಟು ನೀರು ತಾಗದಂತೆ ಎತ್ತರದಲ್ಲಿ ಮುಚ್ಚಿಡುವಂತೆ ಸಲಹೆ ನೀಡಲಾಗಿದೆ.