ಶ್ರೀ ಮನೋಹರ್ ಕಟ್ಟಿಮನಿ ನಿಧನಕ್ಕೆ ಶ್ರೀ ಗೋವಿಂದ ಕಾರಜೋಳ ಅವರಿಂದ ಸಂತಾಪ ಸೂಚನೆ

  • 10 Jan 2024 , 6:03 PM
  • Bengaluru
  • 116

ಬೆಂಗಳೂರು: ಮೇ.10: ಚಿಕ್ಕೋಡಿ ಕ್ಷೇತ್ರದ ಮಾಜಿ ಶಾಸಕರಾದ ಮನೋಹರ್ ಕಟ್ಟಿಮನಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀ ಮನೋಹರ್ ಕಟ್ಟಿಮನಿ ಅವರು ಸರಳ ,ಸಜ್ಜನಿಕೆಯ ವ್ಯಕ್ತಿತ್ವ‌ಹೊಂದಿದ್ದರು.

ಶಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿ ಗೆ ಅನುಪಮ ಸೇವೆಗೈದಿದ್ದಾರೆ. ಅವರ ನಿಧನದಿಂದ ಈ ಪ್ರದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬ ವರ್ಗದವರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದ್ದಾರೆ.

Read All News