ಕೊರೋನಾ ಆರ್ಭಟಕ್ಕೆ ಬೆಚ್ಚ ಬಿದ್ದ ರಾಜ್ಯ ಸರ್ಕಾರ
- 14 Jan 2024 , 10:31 PM
- Bengaluru
- 132
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕು ದಿನೆ ದಿನೆ ಕೊರೋನಾ ಪಿಡಿತರ ಸಂಖ್ಯೆ ತೀರಾ ಹೆಚ್ಚಳವಾಗಿದೆ ಇವತ್ತಿನ ತೀರ್ಮಾನ ಮಾಡಲಾಗುವದು ಎಂದು ಆರೋಗ್ಯ ಇಲಾಖೆ ಇಂದು ತಿಳಿಸಿದಿ. ಹೋರ ರಾಜ್ಯದಿಂದ ಬಂದವರಿಗೆ ಹೆಚ್ಚಿನ ಸೋಂಕುಗಳು ಪತ್ತೆಯಾಗಿವೆ
ವಲಸಿಗರಿಂದ ನಗರದ ಗಲ್ಲಿ ಸೋಂಕು ಹರಡುತ್ತಿರುವುದರಿಂದ ಕಂಟೈನ್ಮೆಂಟ್ ಝೋನ್ಗಳನ್ನು ಆರೋಗ್ಯ ಇಲಾಖೆ ಹೆಚ್ಚಳ ಮಾಡಲಾಗಿದ್ದು ತೀರ್ಮಾನಿಸಿದೆ. ಒಂದೇ ದಿನ 338 ಕಂಟೈನ್ಮೆಂಟ್ ಜೊನ್ ತೆರೆಯಲಾಗಿದೆ.
ದಿನದಿಂದ ದಿನಕ್ಕೆ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಕಂಟೈನ್ಮೆಂಟ್ ಜೊನ್ ಗಳ ಸಂಖ್ಯೆ ಹೆಚ್ಚಳಮಾಡಲಾಗಿದೆ. 338 ಕಂಟೋನ್ಮೆಂಟ್ ಜೊನ್ ಗಳಲ್ಲಿ ರೋಗ ಲಕ್ಷಣ ಪರೀಕ್ಷೆ ಮಾಡಿ ನೇರವಾಗಿ ಹೋಂ ಕ್ವಾರಂಟೈನ್ಗೆ ಕಳುಹಿಸಲಾಗುತ್ತಿದೆ.
ರೋಗ ಪರೀಕ್ಷೆ ಸಂದರ್ಭದಲ್ಲಿ ಸೋಂಕು ಪತ್ತೆಯಾದರೆ ಅಂತಹವರೊಂದಿಗೆ ಕನಿಷ್ಟ 10 ರಿಂದ 50 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ಸೋಂಕಿತರೊಂದಿಗೆ ಸಂಪರ್ಕವಿರಿಸಿಕೊಂಡ ಶೇ.20ರಷ್ಟು ಮಂದಿಗೆ ರೋಗ ತಗುಲುವ ಸಾಧ್ಯತೆ ಇರುವುದರಿಂದ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗಿದೆ .