ಬೆಳಗಾವಿ : ಜಿಲ್ಲೆಯಲ್ಲಿ ಕೊರೋನಾ ಸೋಂಕು ಹತೋಟಿಗೆ ತರಲು ಜಿಲ್ಲಾಡಳಿತ ಘೋಷಣೆ ಮಾಡಿರುವ ಮೂರು ದಿನದ ಲಾಕ್ ಡೌನ್ ಗೆ ಮಳೆರಾಯನ ಸಾಥ್ ನೀಡಿದ್ದು, ಮಧ್ಯಾಹ್ನ ಏಕಾಏಕಿ ಸುರಿದ ಮಳೆಗೆ ಜನರು ಮನೆಯಿಂದ ಹೊರಗಡೆ ಬರದಂತೆ ಲಕ್ಷ್ಮಣ ರೇಖೆ ಹಾಕಿತ್ತು.
ಒಂದೆಡೆ ಕೊರೋನಾ ಹಾವಳಿ ಇನ್ನೊಂದಡೆ ಮಳೆಯ ಅರ್ಭಟದ ನಡುವೆ ಜನರು ಮನೆಯಿಂದ ಹೊರ ಬರದಂತೆ ಮಾಡಿದೆ. ಈ ಮಳೆಯಿಂದ ಯಾವುದೇ ಹಾನಿಯಾದ ವರದಿಯಾಗಿಲ್ಲ.