ಬೆಳಗಾವಿ ಅಧಿವೇಶನ ನಡೆಸದಿದ್ರೆ ಉ.ಕ ಹೋರಾಟ ಅನಿವಾರ್ಯ: ಪೂಜಾರಿ

  • 15 Jan 2024 , 3:52 AM
  • Belagavi
  • 118

ಬೆಳಗಾವಿ: ಬೆಳಗಾವಿಯಲ್ಲಿ ಅಧಿವೇಶನ ಕರೆಯದಿದ್ದರೇ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗಬೇಕಾಗುತ್ತದೆ. ಜು.30ರೊಳಗಾಗಿ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೇ ಆಗಸ್ಟ್ ಮೊದಲ ವಾರದಲ್ಲಿ ಹೋರಾಟ ನಡೆಸುವುದು ಶತಸಿದ್ದ ಎಂದು ಅಶೋಕ ಪೂಜಾರಿ ‌ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜುಲೈ 30ರೊಳಗೆ ಸರಕಾರ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವುದನ್ನು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಅಲ್ಲದೆ, ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ಒತ್ತಾಯ ಮಾಡದೆ ಇರುವುದು ದುರ್ದೈವದ ‌ಸಂಗತಿ ಎಂದರು.

ಕಲ್ಯಾಣರಾವ್ ಮುಚಳಂಬಿ, ಎಂ.ಟಿ.ಪಾಟೀಲ,ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Read All News