ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗಾಲ್ಫ್ ಕ್ರೀಡೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಗಾಲ್ಫರ್ ಅದಿತಿ ಅಶೋಕ್ ಸಾಧನೆಯನ್ನು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮುಕ್ತಕಂಠದಿಂದ ಶ್ಲಾಘನೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
'Congratulations to Karnataka's daughter Aditi Ashok for finishing 4th at #Tokyo2020. The young Indian Golfer deserves a pat on the back for putting India on the International #Golf map. You have a bright future ahead @aditigolf. Best wishes for future endeavours' : CM @BSBommai. pic.twitter.com/RzHp62RZBJ
— CM of Karnataka (@CMofKarnataka) August 7, 2021
ಬೆಂಗಳೂರಿನಲ್ಲಿ ಇಂದು ಬಿಜೆಪಿಯ ಆರೋಗ್ಯ ಸ್ವಯಂ ಸೇವಕರ ಅಭೊಯಾನ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅದಿತಿ ಕರ್ನಾಟಕದವರು. ಬೆಂಗಳೂರಿನ ವರು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಅದಿತಿ ಅವರಿಗೆ ಉಜ್ವಲ ಭವಿಷ್ಯವಿದೆ. ಕಾಮನ್ ವೆಲ್ತ್ ಸೇರಿದಂತೆ ಮುಂಬರುವ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲು, ಪದಕಗಳನ್ನು ಗೆಲ್ಲಲು ಅವಕಾಶವಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ಅದಿತಿ ಜತೆಗಿದೆ. ಇಡೀ ನಾಡಿನ ಜನತೆ ಅವರೊಂದಿಗೆ ಇದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಅದಿತಿ ಅವರ ಸಾಧನೆ ಕುರಿತು ಶುಭ ಹಾರೈಸಿದರು.