ಬೆಳಗಾವಿ :ಡ್ರಗ್ಸ್ ಕೇಸ್ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೈಬಿಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಮಾತನಾಡಿದರು. ಯಾವ ರಾಜಕೀಯ ಯಾರು ಒತ್ತಡ ಮಾಡುವುದಿಲ್ಲ.
ಡ್ರಗ್ಸ್ ಕೇಸ್ ನಂತಹ ಪ್ರಕರಣಗಳಲ್ಲಿ ಯಾರು ಒತ್ತಡ ಮಾಡುವುದಿಲ್ಲ ಎಂದರು. ಡ್ರಗ್ಸ್ ಕೇಸ್ ನಲ್ಲಿ ಬಹಳ ಕಠಿಣ ಕ್ರಮವನ್ನ ನಮ್ಮ ಸರ್ಕಾರ ಕೈಗೊಂಡಿದೆ. ಇದರಲ್ಲಿ ಭಾಗಿಯಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಹೇಳಿದರು. ಡ್ರಗ್ಸ್ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರು ಅವರ ವಿರುದ್ಧ ಕ್ರಮ ಖಂಡಿತ ಜರುಗಿಸಲಾಗುವುದು.
ಇದರಲ್ಲಿ ಪೊಲೀಸರ ಮೇಲೆ ಒತ್ತಡ ಇರುವುದು ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.