ಬೆಳಗಾವಿ :ಕೇಂದ್ರ ಸರ್ಕಾರದ ಹಿಂದಿ ದಿನಾಚರಣೆಗೆ ವಿರೋಧ ವ್ಯಕ್ತ್ ಪಡಿಸಿದ ಕನ್ನಡ ಪರ ಸಂಗಟನೆ ಇಂದು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ದ ದಿಕ್ಕಾರ ಹಾಕಿತು.
ಈ ವೇಳೆಯಲ್ಲಿ ಪೊಲೀಸರು ಮತ್ತು ಕನ್ನಡ ಸಂಘಟನೆ ಕಾರ್ಯಕರ್ತರ ಮಧ್ಯೆ ಜಟಾಪಟಿ ಉಂಟಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರವನ್ನು ಪೊಲೀಸರು ಕಸಿದುಕೊಂಡರು.
ಮೋದಿ ಭಾವಚಿತ್ರವನ್ನು ಪ್ರತಿಕೃತಿಗೆ ಅಂಟಿಸಲು ಮುಂದಾಗಿದ್ದ ಕನ್ನಡ ಹೋರಾಟಗಾರ ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿರವನ್ನು ತಡೆದ ಪೊಲೀಸರು ಅಣಕು ಶವಯಾತ್ರೆ ಮಾಡಲು ಅವಕಾಶ ನೀಡಲಿಲ್ಲ.