ಬಾಲಚಂದ್ರ ಜಾರಕಿಹೊಳಿ, ನೆಹರೂ ಓಲೆಕಾರ ಅವರಿಗೆ ಸಚಿವ ಸ್ಥಾನ ನೀಡಿ: ಕೋಲಕಾರ

  • 15 Jan 2024 , 2:33 AM
  • Belagavi
  • 108

ಬೆಳಗಾವಿ:ರಾಜ್ಯ ಸಚಿವ ಸಂಪುಟ‌ ವಿಸ್ತರಣೆಯಲ್ಲಿ ಅರಬಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಹಾವೇರಿ‌ ಶಾಸಕ ನೇಹರೂ ಓಲೇಕಾರ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಡಾ. ಮಹಾನಿಂಗಪ್ಪ ಕೋಲಕಾರ ಹೇಳಿದರು.

ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹಾವೇರಿ ಹಿರಿಯ ಶಾಸಕ‌ ನೆಹರೂ ಓಲೆಕಾರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡಬೇಕು. ದಲಿತರ ಸಮಸ್ಯೆಗಳಿಗೆ‌ ಸ್ಪಂದಿಸುವ ನಾಯಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದರ ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು.

ಛಲವಾಧಿ ಸಮುದಾಯದ ಅಭಿವೃದ್ಧಿ ನಿಗಮ‌ ಮಾಡಬೇಕು. ರಾಜ್ಯ ಸರಕಾರದ ಬಜೆಟ್ ನಲ್ಲಿ 20 ಸಾವಿರ ಕೋಟಿ‌ ರೂ. ಮೀಸಲಿಡಬೇಕೆಂದು ಆಗ್ರಹಿಸಿದರು.

ಕರ್ನಾಟಕದ ವೀರ ಮಹಿಳೆ ಹಾಗೂ ಛಲವಾದಿ ಸಮುದಾಯದ ಓನಕೆ ಒಬ್ಬವ್ವಾ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ದುರ್ಗೇಶ ಮೇತ್ರಿ, ಆನಂದ ಚೋಗಲಾ, ಸವಿತಾ ಕಾಂಬಳೆ, ಸಾಯಿನಾಥ ಕೋಲಾಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News