ನವದೆಹಲಿ: ಇತಿಚಿಗೆ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ವಚನ ಕಾರ್ಯಕ್ರಮವನ್ನು ನಡೆಯಲಿದೆ, ಸ್ಪೀಕರ್ ಚೇಂಬರ್ ನಲ್ಲಿ ಈ ಪ್ರಮಾಣ ವಚನ ಬೋಧನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಇಲ್ಲಿಯವರೆಗೂ ನೂತನ ಸದಸ್ಯರು ಸದನದಲ್ಲೇ ಪ್ರಮಾಣ ವಚನ ಸ್ವೀಕರಿಸುವುದು ಈವರೆಗೆ ನಡೆದುಕೊಂಡುಬಂದ ಸಂಪ್ರದಾಯವಾಗಿದೆ ಆದರೆ ಕಿಲ್ಲರ್ ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶಕ್ಕೆ ಇದೆ ಮೊದಲ ಬಾರಿಗೆ ಸ್ಪೀಕರ್ ಛೇಂಬರನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಸದಸ್ಯರ ಪರವಾಗಿ ಓರ್ವ ಅತಿಥಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇಂದು ಈರಣ್ಣಕಡಾಡಿ, ಅಶೋಕಗಸ್ತಿ, ಮಲ್ಲಿಕಾರ್ಜುನಖರ್ಗೆ ಸೇರಿದಂತೆ 60 ನೂತನ ರಾಜ್ಯಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.