ಬೆಳಗಾವಿ:ಹುಕ್ಕೇರಿ ತಾಲೂಕು ಬಸಾಪುರ ಗ್ರಾಮದ ಶ್ರೀ ಮಹಾಲಕ್ಷ್ಮೀ ಕಾರ್ತಿಕೋತ್ಸವ ಅಂಗವಾಗಿ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ ನ. 30ರಂದು ಸಂಜೆ 8ಕ್ಕೆ ನಡೆಯಲಿದೆ.

ಬಸಾಪುರ ಮನಿಪ್ರ ರಾಚಯ್ಯ ಮಹಾಸ್ವಾಮೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೆಇಬಿ ಅಧ್ಯಕ್ಷ ಕಲಗೌಡ ಬಸನಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಸಿದಲಿಂಗ ಗು. ಸಿದಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮೊದಲ ಬಹುಮಾನ 25 ಸಾವಿರ, ದ್ವಿತೀಯ 15ಸಾವಿರ ಹಾಗೂ ತೃತೀಯ 10 ಸಾವಿರ ಸೇರಿ ಇತರ ವಿವಿಧ ಬಹುಮಾನಗಳು ಇವೆ. ಆಸಕ್ತ ಸ್ಪರ್ಧಿಗಳು ಪ್ರವೇಶ ₹750 ಜೊತೆಗೆ ನೊಂದಾವಣೆಗಾಗಿ ರಾಜು 8105185140 ಸಂಪರ್ಕಿಸಿ ಭಾಗವಹಿಸಬಹುದಾಗಿದೆ. ಆಟಗಾರರಿಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ ಎಂದು ಮಹಾಲಕ್ಷ್ಮೀದೇವಿ ದೇವಸ್ಥಾನ ಕಮಿಟಿ ಪ್ರಕಟನೆ ತಿಳಿಸಿದೆ.