ಎಸ್ ಡಿ ಎಂ ಧಾರವಾಡದಲ್ಲಿ ಕೊರೋನಾ ಸ್ಫೋಟ:ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡಲು ಡಿಸಿ ಆದೇಶ

  • 14 Jan 2024 , 10:12 PM
  • Dharwad
  • 106

ಧಾರವಾಡ್: ಸಿಎಂ ಬೊಮ್ಮಾಯಿ ವಿಡಿಯೋ ಕಾನ್ಪರೆನ್ಸ್ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು 7 ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾಹಿತಿ ಪಡೆದುಕ್ಕೊಂಡಿದ್ದಾರೆ ಮತ್ತು ಎಸ್ ಡಿ ಎಂ ನಲ್ಲಿ ಇಗಾಗಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

281 ಜನರಲ್ಲಿ , 6 ಜನರಿಗೆ ಮಾತ್ರ ಸಿಂಟಮ್ಸ್ ಕಂಡು ಬಂದಿದೆ, ಉಳಿದ ಎಲ್ಲರೂ ಆರೋಗ್ಯವಾಗಿದ್ದಾರೆ ಹಾಗು 1800 ರಿಸಲ್ಟ ಗಾಗಿ ಕಾಯುತ್ತಿದ್ದೆವೆ ಎಂದರು.

ನಾಳೆ ಬೆಳಿಗ್ಗೆ ಎಲ್ಲ ರಿಪೋರ್ಟಗಳು ಬರುತ್ತವೆ ಹಾಗು ಸಿಎಂ ಕಂಟೈನ್ ಮೆಂಟ್ ಜೋನ್ ಮಾಡುವಂತೆ ಹೇಳಿದ್ದಾರೆ ಇನ್ನು ಸ್ವಲ್ಪ ದಿನಗಳವರೆಗೆ ಓಪಿಡಿ ಬಂದ ಮಾಡಲಾಗುತ್ತೆ ಜಿಲ್ಲೆಯ ಜನರು ಆತಂಕ ಪಡುವ ಹಾಗಿಲ್ಲ ಎಂದು ಹೇಳಿದರು.

281 ಜನರು‌ ಎರಡು ಡೋಸ್ ಪಡೆದುಕ್ಕೊಂಡಿದ್ದಾರೆ ಅವರು ಅರಾಮ ಆಗಿದ್ದಾರೆ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕ್ಕೊಳ್ಳಬೇಕು ಎಂದು ಡಿಸಿ ಆರ್ಡರ್ ಮಾಡಿದರು. ಜನಸಾಂದ್ರತೆ ಬರುವ ಪ್ರದೇಶಗಳಲ್ಲಿ ಮಾಸ್ಕ , ಸ್ಯಾನಿಟೇಸರ್ ಕಡ್ಡಾಯ ಮಾಡಲಾಗಿದೆ ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿಗಳು ಬರಲಿದೆ ಎಂದರು.

ಸೋಮವಾರದವರೆಗೂ ಎಸ್ ಡಿ ಎಂ ಆಸ್ಪತ್ರೆಯ ಓಪಿಡಿ ಬಂದ ಮಾಡಲಾಗುವುದು ಮತ್ತು ಇನ್ನು ನಾವೂ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

Read All News