ಬೆಳಗಾವಿ :ಎಂಇಎಸ್ ಮುಖಂಡನ ಮೇಲೆ ಮಸಿ ಬಳಿದ ಪ್ರಕರಣ ಘಟನೆ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಮತ್ತು ಮಸಿ ಬಳೆದ ಯುವಕನನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹೇಳಿಕೆ ನೀಡಿದ್ದಾರೆ.
ಎಂಇಎಸಗೆ ಮಹಾಮೇಳಾವ್ ಆಯೋಜನೆಗೆ ಅನುಮತಿ ನೀಡಿರಲಿಲ್ಲ ಮತ್ತು ಎಂಇಎಸ ಕಡೆಯವರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಮುಖಂಡರು ಆವಾಜ್ ಹಾಕಿದ್ದಾರೆ.
ಮಹಾನಗರ ಪಾಲಿಕೆ ಸಿಬ್ಬಂದಿ ದೂರು ನೀಡಿದರೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಅಧಿವೇಶನ ಇರುವ ಹಿನ್ನೆಲೆ ನಾಳೆ ಬೆಳಗಾವಿ ಬಂದ್ಗೆ ನಾವು ಅವಕಾಶ ನೀಡುವದಿಲ್ಲ ಎಂದು ಹೇಳಿದ್ದಾರೆ.