ಬೆಳಗಾವಿ: ಬೆಂಗಳೂರುನಲ್ಲಿ ಛತ್ರಪತಿ ಶಿವಾಜಿ ಮೂರ್ತಿಗೆ ಮಸಿ ಬಳಿದ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ ತಡರಾತ್ರಿ ಪ್ರತಿಭಟನೆ ಹಾಗೂ ಆನಗೋಳದಲ್ಲಿನ ಕ್ರಾಂತಿಕವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯ ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ಘಟನೆ ಮರುಕಳಿಸದಂತೆ ಬೆಳಗಾವಿ ನಗರದಲ್ಲಿ 144 ಕಲಂ ( ನಿಷೇಧಾಜ್ಙೆ) ಜಾರಿಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.