ಬೆಳಗಾವಿ: ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ ಬಿದ್ದು ಘಟನೆ ಶಿವಪೇಟೆಯಲ್ಲಿ ಶ್ರೀ ಜಡಿಶಂಕರಲಿಂಗ ದೇವರ ಜಾತ್ರೆ ವೇಳೆ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮ ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38 ಮಹಾರಥೋತ್ಸವವಿತ್ತು. ಮಹಾರಥೋತ್ಸವ ವೇಳೆ ಪಟಾಕಿ ಸಿಡಿಸಿದ್ದ ಕೆಲ ಭಕ್ತರು. ಈ ವೇಳೆ ಪಟಾಕಿ ತಗಲಿ ರಥಕ್ಕೆ ಬೆಂಕಿ ತಗುಲಿದೆ. ತತ್ಕ್ಷಣವೇ ಬೆಂಕಿ ನಂದಿಸಿದ ಗ್ರಾಮಸ್ಥರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ.