ಜಾರ್ಖಂಡ್ :ಪೆಟ್ರೋಲ್, ಡೀಸೆಲ್ ಬೆಲೆ ಇಂದು ಗಗನ ಮುಟ್ಟುತ್ತಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಬಡವನೊಬ್ಬ ಮನೆಯಲ್ಲಿ ದ್ವಿಚಕ್ರವಾಹನವಿದ್ದರೂ ಪೆಟ್ರೋಲ್ ಹಣ ಇಲ್ಲದ ಕಾರಣ ಓಡಿಸಲು ಸಾಧ್ಯವಾಗುತ್ತಿಲ್ಲ. ತನ್ನ ಬೆಳೆಗಳನ್ನು ಮಾರಲು ಮಾರುಕಟ್ಟೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
झारखण्ड सरकार का निर्णय... https://t.co/MpLHJFfoqupic.twitter.com/y0bhZcUheS
— Office of Chief Minister, Jharkhand (@JharkhandCMO) December 29, 2021
ಅದಕ್ಕಾಗಿಯೇ ಅಂತಹ ಪಡಿತರ ಚೀಟಿದಾರರು ತಮ್ಮ ಮೋಟಾರ್ ಸೈಕಲ್ ಅಥವಾ ಸ್ಕೂಟರ್ಗೆ ಪೆಟ್ರೋಲ್ ತುಂಬಿಸಿದರೆ, ಆ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಲೀಟರ್ಗೆ ರೂ.25 ದರದಲ್ಲಿ ವರ್ಗಾಯಿಸುತ್ತೇವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಘೋಷಿಸಿದ್ದಾರೆ ಮತ್ತು ಜನವರಿ 26 ರಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ ಮತ್ತು ಬಡ ಕುಟುಂಬವು ತಿಂಗಳಿಗೆ 10 ಲೀಟರ್ ಪೆಟ್ರೋಲ್ ಅನ್ನು ಪಡೆಯಬಹುದು ಎಂದು ಹೇಳಿದ್ದಾರೆ.