ಬೆಳಗಾವಿ: ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಇವತ್ತು ಕಾಕತಿಯಲ್ಲಿ ವೀರಗತ್ತಿಯ ವೀರರಾಣಿ ಕಿತ್ತೂರು ಚನ್ನಮ್ಮನವರ ಜನ್ಮಭೂಮಿಯಿಂದ (ಕಾಕತಿ) ಕರ್ಮಭೂಮಿಯವರೆಗೆ (ಬೈಲಹೊಂಗಲ) ಲಿಂಗೈಕ್ಯ ಜ್ಯೋತಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು ನೀಡಿದರು. ಲಿಂಗೈಕ್ಯ ಜ್ಯೋತಿ ತೆರಳುವ ಮಾರ್ಗಮಧ್ಯದಲ್ಲಿ ಬೆಳಗಾವಿಯ ಕಿತ್ತೂರು ಚನ್ನಮ್ಮ ಸರ್ಕಲ್ ನಲ್ಲಿರುವ ಚನ್ನಮ್ಮನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನವನ್ನು ಸಲ್ಲಿಸಿದರು.