ಹಾವೇರಿ : ರಾಣೇಬೆನ್ನೂರ ತಾಲ್ಲೂಕಿನ ಇಟಗಿ ಗ್ರಾಮದ ನಿವಾಸಿ ಬಿಜೆಪಿ ಧುರೀಣ ಜಯಣ್ಣ ಸಣ್ಣಬಸಪ್ಪ ಶಿವಲಿಂಗಪ್ಪನವರ (72) ಇವರು ಶನಿವಾರ ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಪುತ್ರಿಯರು ಇದ್ದಾರೆ. ಮೃತರು ಎಪಿಎಂಸಿ ಮಾಜಿ ಉಪಾಧ್ಯಕ್ಷರಾಗಿದ್ದರು. ನಗರದ ಚನ್ನೇಶ್ವರ ಸೌಹಾರ್ಧ ಬ್ಯಾಂಕ್ ಹಾಲಿ ನಿರ್ದೇಶಕರಾಗಿದ್ದರು.