ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಕರುನಾಡಿನ ನಾಡದೋರೆ ಚಿತ್ರದುರ್ಗದ ಅರಸ ರಾಜಾ ವೀರ ಮದಕರಿ ನಾಯಕರ ಪುಣ್ಯ ಸ್ಮರಣೆಯನ್ನು ಅತಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶಿಗೀಹಳ್ಳಿ, ಉಪಾಧ್ಯಕ್ಷ ಶಿವಾ ನಾಯಕ, ಸಂಘಟನೆಯ ಪದಾಧಿಕಾರಿ ಪರಶುರಾಮ ಹಣಗಿ, ಆದರ್ಶ ದನದಮಣಿ, ಕಾರ್ತಿಕ ಪಾಟೀಲ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.