ಬೆಳಗಾವಿ:
ಹಿಂದುತ್ವವಾದಿ ಬಾಳಾಸಾಹೇಬ ಠಾಕ್ರೆ ಅವರ ಹಿಂದೂ ಸಾಮ್ರಾಟ್ ಅವರ ಮಗ ಉದ್ದವ್ ಠಾಕ್ರೆ ಅಧಿಕಾರದ ಆಸೆಗಾಗಿ ಅವರ ವಿಚಾರಧಾರೆಗೆ ತಿಲಾಂಜಲಿ ಕೊಟ್ಟು ಕಾಂಗ್ರೆಸ್ ಜೊತೆ ಸರಕಾರ ರಚನೆ ಮಾಡಿದರು ಎಂದು ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಅವರು ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಾಳಾಸಾಹೇಬ ಠಾಕ್ರೆ ಅವರು ರಾಷ್ಟ್ರವಾದಿ ಹಾಗೂ ಕಾಂಗ್ರೆಸ್ ಜೊತೆಗೆ ಜೀವ ಇರುವವರೆಗೂ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಎಂದರು.