ವಿವಿಧ ಬೇಡಿಕೆಗೆ ರೈತರ ಪ್ರತಿಭಟನೆ

  • 14 Jan 2024 , 9:44 PM
  • Belagavi
  • 103

ಬೆಳಗಾವಿ :ಕಬ್ಬಿನ ಬಾಕಿ ಕೊಡಿಸದ ಸರಕಾರ, ಸಕ್ಕರೆ ಕಾರ್ಖಾನೆಯ ಮಾಲೀಕರ ವಿರುದ್ಧ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರೈತ ಸಂಘಟನೆಯ ಮುಖಂಡರು ಶುಕ್ರವಾರ ಸುವರ್ಣ ವಿಧಾನಸೌಧದ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಕೊಡಿಸುವಂತೆ ಹಲವಾರು ಬಾರಿ ಹೋರಾಟ ನಡೆಸಿದರೂ ಇಲ್ಲಿಯವರೆಗೆ ಕಬ್ಬಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ಸರಕಾರ ವಿಫಲವಾಗಿದೆ.
 

ಸಕ್ಕರೆ ಆಯುಕ್ತರು ಸಚಿವರೊಂದಿಗೆ ಕರೆಯಲಾದ ಸಭೆಯಲ್ಲಿ ರೈತರಿಗೆ ಆಹ್ವಾನ ಮಾಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಹರಿಹಾಯ್ದರು.

Read All News