ಪಿರಿಯಾಪಟ್ಟಣ : ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಮತ್ತು ಸಂತೋಷದಿಂದ ಆಚರಿಸಲಾಯಿತು. 74 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಾಂಶುಪಾಲರಾದಂತಹ ದೇವರಾಜ್ ರವರ ಅಧ್ಯಕ್ಷತೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳು ಎಲ್ಲರೂ ಸೇರಿ ದ್ವಜರೋಹಣವನ್ನು ನೆರವೇರಿಸಿದರು. ನಂತರ ಸಿಹಿ, ಭೋಜನವನ್ನು ಸೇವಿಸಿ ಸಡಗರದ ಆಚರಣೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರಾದ ವಿಶ್ವನಾಥ್, ವೀರೇಶ್ ಮತ್ತು ನಾಗಮ್ಮ ಮುಂತಾದ ಶಿಕ್ಷಕರು ಹಾಜರಿದ್ದರು.