ಬೆಳಗಾವಿ :ಸಾವಿರಾರು ವರ್ಷದ ಹಿಂದಿನಿಂದ ಬಂದಿರುವ ದೇವದಾಸಿ ಅನಿಷ್ಟ ಪದ್ಧತಿಗೆ ಬಲಿಯಾಗಿ ಸಾಮಾಜಿಕ ಹಾಗೂ ಅರ್ಥಿಕವಾಗಿ ತುಳಿತಕ್ಕೆ ಒಳಗಾಗಿದ್ದೆವೆ.
ಕೆಂದ್ರ ಹಾಗೂ ರಾಜ್ಯದ ಎಲ್ಲ ನೌಕರಿ ಗಳಲ್ಲಿ ಅರ್ಹ ದೇವದಾಸಿ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಮೀಸಲಾತಿಯನ್ನು ನೀಡಬೇಕು, ಅರ್ಹ ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಅಂಗನವಾಡಿಯಲ್ಲಿ ಕಾರ್ಯಕರ್ತರಾಗಿ ಭರ್ತಿ ಮಾಡಬೇಕು ಎಂದು ಮಹಿಳಾ ಅಭಿವೃದ್ದಿ ಮತ್ತು ಸಂರಕ್ಷಣಾ ಸಂಸ್ಥೆ ಮಾಸ್ ನ ಮುಖ್ಯ ಕಾರ್ಯನಿರ್ವಾಹಲ ಅಧಿಕಾರಿಯಾದ ಸೀತಮ್ಮ ಜೋಡಟ್ಟಿ ಅವರು ತಿಳಿಸಿದರು.