ಬಂಕಾಪುರ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನೆಹರು ಗಾರ್ಡನ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣೇಶ ಮಂಟಪಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೇಟಿ ನೀಡಿ ಹೂವಿನಹಾರ ಸಮರ್ಪಿಸಿ ವಿಶೇಷಪೂಜೆ ಸಲ್ಲಿಸುವ ಮೂಲಕ ಭಕ್ತಿ ನಮನ ಸಲ್ಲಿಸಿದ್ದಾರೆ. ಹಿಂದೂ ಮಹಾಗಣೇಶ ಸಂಘದ ಅಧ್ಯಕ್ಷ ಈರಣ್ಣ ಬಳಿಗಾರ, ತಾಲೂಕಾ ಬಾ.ಜ.ಪ. ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಬಾ.ಜ.ಪ. ಜಿಲ್ಲಾ ಮಾಜಿ ಉಪಾಧ್ಯಕ್ಷ ಗುಡ್ಡಪ್ಪ ಮತ್ತೂರ, ನಾರಾಯಣಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ ಅಂಗಡಿ, ಮಂಧು ಜಂಗಳಿ, ಮೋಹನ ಮಿರಜಕರ, ಮಂಜುನಾಥ ಈರಪ್ಪನವರ ಸೇರಿದಂತೆ ಇತರರು ಇದ್ದರು.