ಕುಸ್ತಿ ಪೈಲ್ವಾನರು ಆರ್ಥಿಕ ಸಂಕಷ್ಟದಿಂದ ಹೈರಾನು ಸಹಾಯಧನ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ.

  • 15 Jan 2024 , 6:10 AM
  • Belagavi
  • 104

ಬೆಳಗಾವಿ: ಕೊರೋನಾ ಹಾವಳಿ ಪ್ರಾರಂಭ ಆಗಿದಾಗಿನಿಂದ ಕುಸ್ತಿ ಹಿಡಿದು ಜೀವನ ನಡೆಸುತ್ತಿದ್ದ ಕುಸ್ತಿ ಪೈಲ್ವಾನರಿಗೆ ಸಂಕಷ್ಟ ವದಗಿದಂತಾಗಿದೆ. ಕೋವಿಡ್ 19 ಹಾವಳಿಯಿಂದ ಕಳೆದ ನಾಲ್ಕೈದು ತಿಂಗಳುಗಳಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಪೈಲ್ವಾನರಿಗೆ ಸ್ಪರ್ದಿಸಲು ಸ್ಪರ್ಧೆ ನಡೆದಿಲ್ಲ ಆದ್ದರಿಂದ ಪೈಲ್ವಾನರು ಆರ್ಥಿಕ್ ಸಂಕಷ್ಟದಿಂದ ಸಾಕಷ್ಟು ಕುಗ್ಗಿ ಹೋಗಿದ್ದಾರೆ.

ಇದರಿಂದ ಆರ್ಥಿಕ್ ಸಂಕಷ್ಟದಿಂದ ಪೌಸ್ಟಿಕ್ ಆಹಾರ ಇಲ್ಲದೆ ನರಳಾಡುವಂತಾಗಿದೆ ಆದ್ದರಿಂದ ಕುಸ್ತಿ ಕಲೆ ಉಳಿಸುವ ಸಲವಾಗಿ ಸರಕಾರದಿಂದ ಆರ್ಥಿಕ್ ಸಹಾಯ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಸ್ತಿ ಸಂಘದ ಅಧ್ಯಕ್ಷರು ಆದ ವಿಶ್ವನಾಥ್ ಪಾಟೀಲ್, ಅಪ್ಪಯ್ಯ ಅಪ್ಪಣ್ಣವರ, ಸುಧೀರ್ ಬಿರ್ಜೆ, ಜ್ಯೋತಿಬಾ ಹೊಂದರೆ, ಶಿವಾಜಿ ಪಾಟೀಲ್ ಇನ್ನು ಹಲವಾರು ಕುಸ್ತಿ ಪೈಲ್ವಾನರು ಉಪಸ್ಥಿತರಿದ್ದರು.

Read All News