ಬಂಕಾಪುರ: ಪಟ್ಟಣದ ನೆಹರು ಗಾರ್ಡನ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯು ಇಂದು ರವಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸ್ರು ಬಾರಿ ಬಂದೋಬಸ್ತ ಒದಗಿಸಿದ್ದಾರೆ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲಿ ಸಿ.ಸಿ.ಕ್ಯಾಮರಾ, ದೂರದೃಷ್ಠಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪಟ್ಟಣದ ಆಯಾಕಟ್ಟಿನ ಪ್ರದೇಶದಲ್ಲಿ ಮುಂಜಾಗ್ರತೆ ಕ್ರಮವಾಗಿ 20ಕ್ಕೂ ಅಧಿಕ ಸಿ.ಸಿ.ಕ್ಯಾಮಾರಗಳ ಕಣ್ಗಾವಲನ್ನು ಇರಿಸಲಾಗಿದೆ. 4 ಡಿ.ಎಸ್.ಪಿ. 13 ಸಿ.ಪಿ.ಐ. 25 ಪಿ.ಎಸ್.ಐ. 170 ಸಿವಿಲ್ ಪೊಲೀಸ್, 5 ಡಿ.ಆರ್. ತುಕಡಿಗಳು, ಇಂಟರ್ ಸೆಪ್ಟರ್ ವಾಹನ, ಪೆಟ್ರೋಲಿಯಂ ವಾಹನ ಸೇರಿದಂತೆ ದೂರದೃಷ್ಠಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ವಿವಿದೆಡೆಗಳಿಂದ ಪಟ್ಟಣದ ಒಳಗೆ ಪ್ರವೇಸಿಸದಂತೆ ಸವಣೂರ ಕ್ರಾಸ್, ಮುಂಡಗೋಡ ಕ್ರಾಸ್, ಹಾವೇರಿ ರಸ್ತೆಗೆ ನಾಕಾಬಂದಿ ಮಾಡಲಾಗಿದೆ. ಸಾರ್ವಜನಿಕರನ್ನು ಪಟ್ಟಣದ ಒಳಗೆ ಪ್ರವೇಸಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.