ಸಮಾಜ ಸೇವಕ ಆನಂದ ಚೋಪ್ರಾ ಇನ್ನಿಲ್ಲ

  • 14 Jan 2024 , 10:50 PM
  • Belagavi
  • 224

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ಮುಖಂಡರಾಗಿಯು ಕಾರ್ಯ ನಿರ್ವಹಿಸಿದ್ದ ಆನಂದ ಚೋಪ್ರಾ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಅವರು ವೃದ್ಧ ತಾಯಿ, ಪತ್ನಿ , ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸವತ್ತಿಯ ವಿಧಾನ ಸಭಾ ಕ್ಷೇತ್ರಕ್ಕೆ ಹಲವು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇವರು ಕಳೆದ ಬಾರಿ ಅತೀ ಕಡಿಮೆ ಮತ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇವರ ನಿಧನದ ಸುದ್ದಿಯಿಂದ ಅಭಿಮಾನಿ ಬಳಗದವರು ಕಂಬನಿ ಮಿಡಿದ್ದಾರೆ.

Read All News