ಯಮಕನಮರಡಿ : ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಗೋಕಾಕದ ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ ಕಂಬನಿ ಮಿಡಿದಿದ್ದಾರೆ. 2001 ರಿಂದಲೂ ಭಾರತೀಯ ಜನತಾ ಪಕ್ಷವನ್ನು ಬೆಳಗಾವಿ ಜಿಲ್ಲೆಯ ಮೂಲೆ-ಮೂಲೆಗೂ ಒಯ್ದು ಸಂಘಟಿಸಿದ್ದ ಸುರೇಶ ಅಂಗಡಿಯವರು ಜಿಲ್ಲೆಯ ಅಭಿವೃದ್ದಿಗೆ ವಿಶೇಷ ಪ್ರಯತ್ನ ಮಾಡಿದ್ದರು. ಶೇಡಬಾಳ-ಬೆಂಗಳೂರು ನಡುವೆ ನೂತನ ರೈಲಿನ ಸಂಚಾರ ಆರಂಭಿಸಿದ್ದ ಅವರು, ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗದ ಕನಸನ್ನು ಕಂಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಮನೋಭಾವದವರಾಗಿದ್ದ ಅವರು ಜಿಲ್ಲೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕೆಂಬ ಹಂಬಲವನ್ನು ಹೊಂದಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲೇಂದು ಮಾಜಿ ಶಾಸಕ ಎಂ.ಎಲ್. ಮುತ್ತೆನ್ನವರ ಪ್ರಾರ್ಥಿಸಿದ್ದಾರೆ.