ಚೆನ್ನೈ: ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದ ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯ ಸಂಸ್ಕಾರ ಇಂದು ನೆರವೇರಲಿದೆ. ಚೆನ್ನೈನ ಹೊರ ಹೊಲಯದಲ್ಲಿರುವ ಎಸ್ಪಿಬಿ ಅವರ ಫಾರ್ಮ್ಹೌಸ್ ರೆಡ್ ಹಿಲ್ಸ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ರೆಡ್ಹಿಲ್ಸ್ನ ತೋಟದ ಮನೆ ಎಸ್ಬಿಪಿ ನೆಚ್ಚಿನ ಸ್ಥಳ ಆಗಿತ್ತು. ಅವರ ಕುಟುಂಬಸ್ಥರು, ಸ್ನೇಹಿತರು ಇಲ್ಲಿ ಆಗಾಗ ಸೇರುತ್ತಿದ್ದರು. ಅದೇ ತೋಟದಲ್ಲಿ ಎಸ್ಪಿಬಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. ಎಸ್.ಪಿ.ಬಿ ಅವರ ಆರೋಗ್ಯ ಚೇತರಿಕೆಗೆ ಅವರ ಅಭಿಮಾನಿಗಳು ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ್ದರು. ಆದರೆ, ಅದ್ಯಾವುದೂ ಫಲಿಸದೇ ನಿನ್ನೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.