ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿ ಬಳಗ ಕೊರಗುತ್ತಿದೆ. ಅವರು ಇಲ್ಲದ ಮೊದಲ ಹುಟ್ಟುಹಬ್ಬ ಇದಾದರೆ ಇನ್ನೊಂದೆಡೆ ಸದ್ಯದಲ್ಲೇ ಚಿರು ಮತ್ತೆ ಹುಟ್ಟಿ ಬರ್ತಾರೆ ಅನ್ನುವ ಖುಷಿ ಅಭಿಮಾನಿ ಬಳಗಕ್ಕಿದೆ.
ಇದರ ಜೊತೆಗೆ ಚಿರು ಅಭಿನಯದ 'ಶಿವಾರ್ಜುನ' ಸಿನಿಮಾ ಮತ್ತೊಮ್ಮೆ ತೆರೆಕಂಡಿರುವುದು ಖುಷಿಯ ಸಮಾಚಾರ ಆಗಿದೆ. ಹುಟ್ಟು ಹಬ್ಬದ ನಿಮಿತ್ಯ ಪತ್ನಿ ಮೇಘನಾರಾಜ್ ಸರ್ಜಾ ಪತಿಯ ಸಮಾಧಿ ಕಡೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಚಿರು ನನ್ನ ಮಗುವಾಗಿ ಯಾವಾಗ ಬರಬೇಕು ಅನ್ನುವುದು ಅವರಿಷ್ಟ, ಇವತ್ತೆ ಬಂದರೆ ಬರಲಿ.

ಅವರ ಕನಸಿನಂತೆ ಸೀಮಂತ ಕಾರ್ಯ ನೆರವೇರಿದೆ ಇದರಿಂದ ನನಗೆ ತುಂಬಾ ಖುಷಿಯಾಯಿತು. ನನ್ನ ಸೀಮಂತ ದಿನ ಎಲ್ಲರೂ ಸೇರಿ ಅದನ್ನು ಸ್ಪೆಷಲ್ಲಾಗಿ, ಮ್ಯಾಜಿಕಲ್, ಫೇರಿ ಟೇಲ್ ತರಹ ಮಾಡಿದರು ಅಂತಾ ಮೇಘನಾ ರಾಜ್ ಹೇಳಿದರು.