ಗದಗ : ನಗರದ ಭಾರತೀಯ ಜೀವ ವಿಮಾ ನಿಗಮದ ಕಛೇರಿ, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ, ಪಶ್ಚಿಮ ಪದವಿಧರ ಕ್ಷೇತ್ರದ ಅಭ್ಯರ್ಥಿ ಪ್ರೊ. ಎಸ್. ವಿ. ಸಂಕನೂರ ಅವರ ಪರವಾಗಿ ಪ್ರಮುಖರಾದ ಎಚ್. ಎನ್. ಕಾಳೆ, ಎಚ್. ಬಿ. ಪೂಜಾರ, ಬಿ. ವ್ಹಿ. ಸಜ್ಜನರ ಸೇರಿದಂತೆ ಮುಂತಾದ ಗಣ್ಯರು ಮತಯಾಚನೆ ಮಾಡಿದರು. ಎಲ್ಲ ಕಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.