ಗದಗ: ಜಿಲ್ಲೆಯ ರೋಣ ಪಟ್ಟಣದ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರೊ. ಎಸ್. ವಿ. ಸಂಕನೂರ ಅವರ ಪರವಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಸಂಕನೂರ ಅವರ ನೇತೃತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಜೀವ್ ಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಬಿಎಡ್ ಕಾಲೇಜುಗಳ ಸೇರಿದಂತೆ ವಿವಿಧಡೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಚ್. ಎನ್. ಕಾಳೆ, ಎಸ್. ಎನ್. ಹೊಟ್ಟಿನ, ಪ್ರಾಚಾರ್ಯ ಡಾ. ವೀರೇಶ್ ಕೊಟ್ಟೂರಶೆಟ್ರು, ಡಾ. ಎಚ್. ಆರ್. ದೊಡ್ಮನಿ, ಶಿವು ರೋಣದ, ಶ್ರೀಮತಿ ಅಂಗಡಿ, ಕಲ್ಲನಗೌಡ ಮಾನೇದ, ಅರಹುಣಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.