ನಾನು ನಿಮ್ಮ ಸೇವೆಗೆ ಸದಾ ಸಿದ್ಧ ಎಂದ ಶಾಸಕ ಕೆ ಮಹದೇವ್

  • 14 Jan 2024 , 11:42 PM
  • Mysuru
  • 242

ಮೈಸೂರು: ತಾಲೂಕಿನ ಚಪ್ಪರದಹಳ್ಳಿ ಸೇರಿದಂತೆ ಗೋರಹಳ್ಳಿ ಗ್ರಾಮದಿಂದ ಹಾರನಹಳ್ಳಿ ಅಂಬಲಾರೆ ಮೂಲಕ ಚನಕೇಶವಪುರ ದೊಡ್ಡಕಮರವಲ್ಲಿ ಗ್ರಾಮದ ವರೆಗೆ 16 ಕಿಲೋಮೀಟರ್ 16.50 ಕೋಟಿ ವೆಚ್ಚದಲ್ಲಿ ಒಳ ಚರಂಡಿ, ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗ್ರಾಮದಲ್ಲಿರುವ ಶಿವನ ದೇವಾಲಯಕ್ಕೆ 5 ಲಕ್ಷ ರೂ ನೆರವು ನೀಡುವುದಾಗಿ ಭರವಸೆ ನೀಡಿದರು.

ಭಾವುಕರಾಗಿ ಕಣ್ಣೀರು ಹಾಕಿದ ಶಾಸಕ ಕೆ ಮಹದೇವ್: ಭಾವುಕರಾದ ಶಾಸಕ ಕೆ ಮಹದೇವ್ ನಾನು ಕೋವಿಡ್ 19 ರೋಗಕ್ಕೆ ತುತ್ತಾಗಿದ್ದು ನಾನು ಬದುಕುತ್ತಿನೀ ಎಂದು ಭಾವಿಸಿರಲಿಲ್ಲ ಆದರೆ ನಿಮ್ಮೆಲ್ಲರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ನಿಮ್ಮ ಪ್ರೀತಿ ಹೀಗೆ ಇರಲಿ ನಾನು ನಿಮ್ಮ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.

Read All News