ಬೆಳಗಾವಿ: ವೀರ ರಾಣಿ ಕಿತ್ತೂರು ಚನ್ನಮ್ಮ ಹುಟ್ಟೂರಿನಲ್ಲಿ ಇಂದು ಚನ್ನಮ್ಮ ಉತ್ಸವ ಸರಳವಾಗಿ ಆಚರಿಸಲಾಯಿತು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ತಾಯಿಯ ಉತ್ಸವನ್ನು ಪ್ರತಿ ವರ್ಷ ಅತೀ ವಿಜೃಂಬನೆಯಿoದ ಕಿತ್ತೂರು ಹಾಗೂ ಕಾಕತಿಯಲ್ಲಿ ಆಚರಿಸಲಾಗುತ್ತಿತ್ತು.

ಈ ವರ್ಷ ಮಹಾಮಾರಿ ಕೊರೋನಾ ಹಿನ್ನಲೆಯಿಂದ ಎಲ್ಲ ಕಾರ್ಯಕ್ರಮಗಳಿಗೆ ತೆರೆ ಬಿದ್ದಿರುವ ಹಿನ್ನಲೆ ಅತೀ ಸರಳ ಪದ್ದತಿಯಲ್ಲಿ ಕೊರೋನಾ ಕಟ್ಟುಪಾಡಿನಂತೆ ವೀರ ರಾಣಿಯ ಜನ್ಮ ಸ್ಥಳವಾದ ಕಾಕತಿಯಲ್ಲಿ ಚನ್ನಮ್ಮ ಉತ್ಸವಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಚಾಲನೆ ನೀಡಿದರು. ಈ ಸಂದಭಲ್ಲಿ ಜಿಪಂ ಸಿಇಓ ದರ್ಶನ, ಪೋಲಿಸ್ ಆಯುಕ್ತ ತ್ಯಾಗರಾಜನ್, ಡಿಸಿಪಿ ವಿಕ್ರಂ ಅಮಟೆ, ಚಂದ್ರಕಾoತ ನಿಲಗಾರ, ಕಾಕತಿ ಪಿಎಸ್ಐ ರಾಘವೇಂದ್ರ ಹಳ್ಳೂರ, ಜಿಪಂ ಸದಸ್ಯ ಸಿದ್ದು ಸುಣಗಾರ ಸೇರಿದಂತೆ ಇತರೆ ಜನಪ್ರತಿನಿಧಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು.