ಹುಕ್ಕೇರಿ: ತಾಲೂಕಿನ ಯಮಕನಮರಡಿ ಕ್ಷೇತ್ರದ ಇಸ್ಲಾಂಪೂರ ಗ್ರಾಮದಲ್ಲಿ ಬಡಿಗೇರ ಗಲ್ಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಗಜಾನನ ಯುವಕ ಸಂಘದವರು ಮಾಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸರಕಾರಿ ಫ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ.ಎಮ್.ಎಸ್. ಕುಡವಕ್ಕಲಗಿ ಅವರು ನೇರವೇರಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿ, ಬೆಳೆದು ಬಂದು ದಾರಿ ಬಗ್ಗೆ ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಶೆಮ್ಮಡೆ ಮತ್ತು ತಾಸಗಾಂವ ಗುರುಗಳು ಊರಿನ ಪ್ರಮುಖರಾದ ಲಗಮಣ್ಣಾ ಜಿರಲಿ, ಶ್ರೀಮತಿ ಅಮ್ಮೀರಾ ದೇಸಾಯಿ, ರಾಮಚಂದ್ರ ಪಾಟೀಲ್, ಗೌಡಪ್ಪ ಜಿರಲಿ, ಬಾಬಾಸಾಬ ದೇಸಾಯಿ, ನಿಂಗಪ್ಪಾ ಹಾರಣಕೊಳ್ಳ, ಹಾಗೂ ಗಜಾನನ ಸಂಘದ ಯುವಕರಾದ ಅಡಿವೆಪ್ಪಾ ಬಾಗರಾಯಿ, ಪಂಡಿತ ಬಡಿಗೇರ, ವಿನೋದ ಬಡಿಗೇರ, ಮದಾರ್ ಮುಲ್ಲಾ, ಕರೆಪ್ಪಾ ರೋಣಿ, ಪ್ರವೀಣ್ ಯದ್ದಲಗುಡ್ಡ, ರಾಜು ಬಡಿಗೇರ, ವಿಠ್ಠಲ ಬಾಗರಾಯಿ, ಪ್ರಶಾಂತ್. ಬಡಿಗೇರ, ಹಣಮಂತ ಬಾಗರಾಯಿ, ಸಂಜು ಬಡಿಗೇರ, ರಾಮು ಬಡಿಗೇರ, ಅಡಿವೆಪ್ಪಾ ಗುಡಸ, ಆನಂದ ಬಯನ್ನವರ, ಶಂಕರ ಆಡಿನ್ನವರ, ಆನಂದ ತುಪಳಿ, ಶಂಕರ್ ಹಟ್ಟಿ, ಹಾಗೂ ಇನ್ನುಳಿದ ಗ್ರಾಮಸ್ಥರು ಉಪಸ್ಥಿತರಿದ್ದರು.