ಬೆಳಗಾವಿ: ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ ಬಿಡಿಸಿಸಿ ಬ್ಯಾಂಕ್ ಜಿದ್ದಾ ಜಿದ್ದಿನ ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ಎರಡು ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಮಾಜಿ ಎಂಇಎಸ ಶಾಸಕ ಅರವಿಂದ ಪಾಟೀಲ ಮಧ್ಯೆ ನೆಡೆದ ತೀವ್ರ ಪೈಪೋಟಿಯಲ್ಲಿ ಶಾಸಕಿ ಅಂಜಲಿ ನಿಂಬಾಳಕರ್ ಸೋಲು ಅನುಭವಿಸಿದ್ದಾರೆ.

ಅಂಜಲಿ ನಿಂಬಾಳ್ಕರ್ ಗೆ 25 ಮತ, ಅರವಿಂದ ಪಾಟೀಲಗೆ 27 ಮತ ಬಿದ್ದಿದೆ. ಅರವಿಂದ ಪಾಟೀಲ್ ಅವರಿಗೆ ಬಿಜೆಪಿಯ ಘಟಾನುಘಟಿ ನಾಯಕರ ಬೆಂಬಲ ನೀಡಿರುವ ಫಲ ಕೊನೆಗೂ ಸಫಲವಾಗಿದೆ.