ಬೆಳಗಾವಿ: ನಾನು ಈ ಚುನಾವಣೆಯಲ್ಲಿ ಸೋಲು ಅನುಭವಿಸಿದೆ ಎನ್ನುವಕ್ಕಿಂತ ಘಟಾನುಘಟಿ ನಾಯಕರ ಎದುರು ತೀವ್ರ ಪೈಪೋಟಿ ನೀಡಿದ್ದು ನನಗೆ ಗೆಲವಿನಷ್ಟೇ ಸಂತೋಷವಾಗಿದೆ ಎಂದರು ಶಾಸಕಿ ಅಂಜಲಿ ನಿಂಬಾಳ್ಕರ್. ಶುಕ್ರವಾರ ಬೆಳಗಾವಿ ಬಿಕೆ ಮಾಡೆಲ್ ಆವರಣದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಚುನಾವಣೆಯಲ್ಲಿ ಎರಡು ಮತಗಳ ಅಂತರದಿಂದ ಸೋಲು ಅನುಭವಿಸಿದೆ.
ನನ್ನ ನಂಬಿ 25 ಜನ ಮತದಾನ ಮಾಡಿದ್ದಾರೆ ಅವರಿಗೆ ನಾನು ಚಿರ ಋಣಿಯಾಗಿರುತ್ತೇನೆ. ಇದು ನನಗೆ ಸೋಲು ಎನ್ನುವಕ್ಕಿಂತ ಘಟಾನುಘಟಿ ನಾಯಕರ ಎದುರು ಸ್ಪರ್ಧಿಸಿ ಗೆಲವು ಖಂಡಿದ್ದೇನೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.