ನಿಪ್ಪಾಣಿ: ಮಹಾರಾಷ್ಟ್ರದವರ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಏ ಕರ್ನಾಟಕ ಉಸ್ಕಾ ಬಾಪ್ ಕಾ ನಯ್ ಏ ಹಮಾರೆ ಹೈ ಕರ್ನಾಟಕ ಮಾತೆ ನಮ್ಮ ಮಾತೆ ಎಂದು ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಹೇಳಿಕೆಗೆ ಸಚಿವ ಪ್ರಭು ಚವ್ಹಾನ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದಿದ್ದ ಮಹಾರಾಷ್ಟ್ರ ರಾಜ್ಯದ ಡಿಸಿಎಂ ಅಜೀತ್ ಪವಾರ್ ಹೇಳಿಕೆ ಕುರಿತು ಇಂದು ನಿಪ್ಪಾಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಶೋಸಂಗಪನಾ ಸಚಿವ ಪ್ರಭು ಚೌವ್ಹಾನ್
ನಾವು ಕರ್ನಾಟಕದವರು ಈ ಬಗ್ಗೆ ಯಾವುದೇ ರೀತಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಕರ್ನಾಟಕ ಮಾತೆ ನಮ್ಮ ಮಾತೆ ಹಲವಾರ ದಿನಗಳಿಂದ ಕೆಲವು ಜನ ಇಂತಹ ಮಾತನಾಡುತ್ತಾ ಬಂದಿದ್ದಾರೆ ಅವರ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಅವರ ಮಾತಿಗೆ ಖಡಕ್ ಆಗಿ ತಿರುಗೇಟು ನೀಡಿದರು.