ಏಕಾಏಕಿ ಕಾಡಾನೆ ದಾಳಿ ವೃದ್ಧನೊಬ್ಬ ಸ್ಥಳದಲ್ಲೇ ಸಾವು

  • 14 Jan 2024 , 11:07 PM
  • Mysuru
  • 127

ಮೈಸೂರು: ಏಕಾಏಕಿ ಮನೆ ಮೇಲೆ ಕಾಡಾನೆ ದಾಳಿ ಮಾಡಿದರ ಪರಿಣಾಮದಿಂದಾಗಿ ವೃದ್ಧನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ.

ನೆಟ್ಟಕಲ್ಲಹುಂಡಿ ಗ್ರಾಮದ ವೃದ್ಧ ದಂಪತಿ ಚಿನ್ನಪ್ಪ ಹಾಗೂ ಕೊಟ್ಟೂರಮ್ಮ ನೆಲೆಸಿರುವ ಮನೆಯ ಮೇಲೆ ಶನಿವಾರ ರಂದು ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಆಗ ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ಆತನ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯಗಳಾಗಿವೆ.

ಗಾಯಾಳು ಕೊಟ್ಟೂರಮ್ಮನವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಇನ್ನು ಕಾಡಾನೆ ದಾಳಿಯಿಂದ ಗ್ರಾಮದ ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಘಟನೆ ಸಂಬಂಧಿಸಿದೆ.

Read All News