ನವದೆಹಲಿ: ಪ್ರತಿಷ್ಠಿತ ಲಲಿತಕಲಾ ಅಕಾಡೆಮಿಯ ಜನರಲ್ ಕೌನ್ಸಿಲ್ ಸದಸ್ಯ ಹಾಗೂ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಕೌನ್ಸಿಲ್ (ಐಸಿಸಿಆರ್) ಅಧ್ಯಕ್ಷ ಡಾ.ವಿನಯ್ ಸಹಸ್ತ್ರಬುದ್ದೆ ಅವರನ್ನು ಬುಧವಾರದಂದು ಡಾ.ಸೋನಾಲಿ ಸರ್ನೋಬತ್ ಭೇಟಿ ಮಾಡಿದರು.

ನಂತರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಉತ್ತಮ್ ಪಚಾರ್ನೆ ಮತ್ತು ಡಾ.ಸೋನಾಲಿ ಸರ್ನೋಬತ್ ಲಲಿತಕಲಾ ಅಕಾಡೆಮಿಯ ಸವಾಲುಗಳು ಮತ್ತು ವ್ಯಾಪ್ತಿಯ ಬಗ್ಗೆ ಅವರೊಂದಿಗೆ ಚರ್ಚಿಸಿದರು.

ಡಾ.ಸೋನಾಲಿ ಅವರು ಬೆಳಗಾವಿಯ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾಗಿದ್ದು, ಇತ್ತೀಚೆಗೆ ಬೆಳಗಾವಿಯಲ್ಲಿ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ, ಮತ್ತು ಉತ್ತರ ಕರ್ನಾಟದಲ್ಲಿ ಸ್ಥಾಪಿಸಲು ಬಹುತೇಕ ಅನುಮತಿ ನೀಡಲಾಗಿದೆ.

ಡಾ .ಸೋನಾಲಿ ಅವರು ಸಾಮಾಜಿಕ ಸುಧಾರಣಾ ಸಮಿತಿ ಮತ್ತು ಅಸೋಸಿಯೇಷನ್ಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಮತ್ತು ಡಾ.ವಿನಯ್ ಸಹಸ್ತ್ರಬುದ್ದೆ ಸಮಸ್ಯೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.