ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಬೇಕೆಂದು ಆಗ್ರಹ

  • 17 Dec 2023 , 5:46 PM
  • Belagavi
  • 87

ಬೆಳಗಾವಿ :ಧಾರವಾಡ ಕೇಂದ್ರೀಕೃತ, ಸಮಗ್ರ ಅಭಿವೃದ್ಧಿ ಹೊಂದಲು ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚನೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿರುವ ಬಸ್ತವಾಡ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದಲ್ಲಿಯ ಎಲ್ಲಾ ವಾಡ್೯ ವತಿಯಿಂದ ಪ್ರತ್ಯೇಕ ‌ಮಹಾನಗರ ಪಾಲಿಕೆ ಕಾರ್ಯಗತಗೊಳಿಸುವ ದಿಸೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಈ ಕುರಿತು ನಿರ್ಣಯ ತೆಗೆದುಕೊಳ್ಳಲು ನಮ್ಮ‌‌ ಹೋರಾಟ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಳೆದ 1962ರಲ್ಲಿ ಪಾಲಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರಗೆ ಧಾರವಾಡದ ವಾರ್ಡುಗಳಿಗೆ ಮಾಡಲಾದ ಅಭಿವೃದ್ಧಿಯ ಸಂಪೂರ್ಣ ತುಲನಾತ್ಮಕ ವರದಿ ನೀಡಬೇಕು. ಇದರಲ್ಲಿ ಸರಕಾರ ನೀಡಿರುವ ಸಹಾಯ ಧನ, ಸ್ಮಾರ್ಟ್ ಸಿಟಿ, ಅಮೃತ್ ಸ್ವಚ್ಛ ಭಾರತ‌‌ ಮಿಷನ್, ನಗರೋತ್ಥಾನ ಸಿಎಂ ವಿಶೇಷ ಅನುದಾನ ಸೇರಿದಂತೆ ಇನ್ನಿತರ ಕೈಗೊಂಡ ಕಾಮಗಾರಿಗಳ ಸಮಗ್ರ ‌ಮಾಹಿತಿಯನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗುವವರೆಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗಳನ್ನು ಮತ್ತು ಸ್ಥಾಯಿ ಸಮಿತಿ ಸಭೆಗಳನ್ನು ಎರಡು ತಿಂಗಳಿಗೊಮ್ಮೆ ನಡೆಸಬೇಕು. ಮೇಯರ್, ಉಪಮೇಯರ್ ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಧಾರವಾಡದಲ್ಲಿಯೇ ಕಾರ್ಯನಿರ್ವಹಿಸಬೇಕು‌ ಎಂದು ಒತ್ತಾಯಿಸಿದರು.

ವೆಂಕಟೇಶ ಮಾಚಕನೂರ, ಲಿಂಗರಾಜ ಸರದೇಸಾಯಿ, ಮನೋಜ ಪಾಟೀಲ, ಬಿ.ಎನ್.ಪೂಜಾರಿ, ಶಂಕರ ನೀರಾವರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News