ಬೆಳಗಾವಿ: ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗ ದಿಂದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ,ಗೋಕಾಕ , ರಾಯಬಾಗ ,ಹಾಗೂ ಅಥಣಿ ಘಟಕಗಳಿಂದ ಬೆಂಗಳೂರ ಪೂಣೆ, ಮುಂಬಯಿ, ಹಾಗೂ ಇತರೆ ಅಂತರರಾಜ್ಯ ಮಾರ್ಗಗಳಿಗೆ ಆ 28 ರಿಂದ ಸಪ್ಟೆಂಬರ್ 11 ರ ವರೆಗೆ ಹಚ್ಚುವರಿ ವಾಹನಗಳನ್ನು ಆರಂಭಸಲಾಗಿದೆ.
ಗಣೇಶ ಹಬ್ಬ ಆಚರಿಸಿ ಮರಳುವ ಪ್ರಯಾಣಿಕರಿಗೆ ಚಿಕೋಡಿ ವಿಭಾಗ ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ, ಅಥಣಿ, ಹಾಗೂ ಹುಕ್ಕೇರಿ, ಘಟಕಗಳಿಂದ ಆ 31 ಮತ್ತು ಸಪ್ಟೆಂಬರ್ 04 ರಂದು ಹೆಚ್ಚುವರಿ ವಾಹನಗಳನ್ನು ಬೆಂಗಳೂರ ಮತ್ತು ಇತರೆ ಮಾರ್ಗಗಳಿಗೆ ಆರಂಭಸಲಾಗುವದು ಸಾರ್ವಜಿನಿಕ ಪ್ರಯಾಣಿಕರು .
ಈ ವಿಶೇಷ ಹಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಲು ವಾ.ಕ.ರ.ಸಾ.ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.