ಅನ್ಯಭಾಷಿಯ ಪ್ಲ್ಯಾಕ್ಸ್ ಅಳವಡಿಕೆ : ಅಥಣಿ ಪಟ್ಟಣದಲ್ಲಿ ಕಲ್ಲು ತುರಾಟ

  • shivaraj bandigi
  • 14 Jan 2024 , 8:38 PM
  • Belagavi
  • 424

ಅಥಣಿ : ಕನ್ನಡ ಕಡ್ಡಾಯ ಬಳಕೆಗೆ  ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ   ಕರವೇ ಅಧ್ಯಕ್ಷ ನಾರಾಯಣ ಗೌಡ ಅವರನ್ನ ಬಂದಿಸಿದ ಪೋಲಿಸ್ ಕೂಡಲೆ ಬಿಡುಗಡೆ ಮಾಡುವಂತೆ ಅಥಣಿ ಯಲ್ಲಿ ಕರವೇ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.

ಅಥಣಿ ಪಟ್ಟಣದ ಶಿವಯೋಗಿ ಸರ್ಕಲ್ ನಲ್ಲಿ ವಿಜಯಪುರ- ಸಂಕೆಶ್ವರ ರಾಷ್ಟ್ರೀಯ ಹೆದ್ದಾರಿ ತಡೆದು

 ಪ್ರತಿಭಟನಾಕಾರರು ಕರವೇ ಅಧ್ಯಕ್ಷ ನಾರಾಯಣಗೌಡರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಪಟ್ಟಣದ ಬೀದಿ ಬದಿಗಳಲ್ಲಿ ಅಳವಡಿಸಿದ ಇಂಗ್ಲೀಷ್ ಬಳಕೆಯ ಬ್ಯಾನರ್ ಗಳನ್ನ ಹರಿದು ಅಂಗಡಿ ಮುಗಂಟ್ಟುಗಳಿಗೆ ಕಲ್ಲು ತೂರಾಟ ಮಾಡಿದ ಕರವೇ ಸದಸ್ಯರು ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು ಪ್ರತಿಭಟನೆ ತಾರಕಕ್ಕೆರುತ್ತಿದಂತೆ ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧನಕ್ಕೋಳಪಡಿಸಿದ್ದಾರೆ.

Read All News