ಲೋಕಸಭೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಕೊತಕೊತ.

  • shivaraj bandigi
  • 6 Jun 2024 , 12:56 PM
  • Athani
  • 4022

ಅಥಣಿ : ಕಾಂಗ್ರೆಸ್ ನಾಯಕರಿಂದ ಒಬ್ಬರ ಮೇಲೆ ಒಬ್ಬರಿಂದ ಕೆಸರೆರಚಾಟ ಶುರುವಾಗಿದೆ.ಸಚಿವ ಸತೀಶ ಜಾರಕಿಹೊಳಿ ಹಾಗೂ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ನಡುವೆ ವೈಮನಸ್ಸು ಊಂಟಾಗಿದೆ.

ಇಂದು ಬೆಳಗ್ಗೆ ಚಿಕ್ಕೋಡಿಯಲ್ಲಿ ಪ್ರೆಸ್ ಮೀಟ್ ಕರೆದು ಸಚಿವ ಸತೀಶ ವಿರುದ್ಧ ಶಾಸಕ ಮಹೇಂದ್ರ ತಮ್ಮಣ್ಣವರ ಅಸಾಮಾಧಾನ ಹೊರಹಕಿದ್ದಾರೆ.ಈ ಭಾಗದ ಎಸ್‌ಸಿ ನಾಯಕರನ್ನು ರಾಜಕೀಯವಾಗಿ ಜಾರಕಿಹೊಳಿ ಪ್ಯಾಮಿಲಿ ನಿರ್ನಾಮ ಮಾಡ್ತಿದೆ ಎಂದು ಆರೋಪಿಸಿದರು. 


ಮಹೇಂದ್ರ ತಮ್ಮಣ್ಣವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸತೀಶ ಜಾರಕಿಹೊಳಿ.

ಮತದಾನದಕ್ಕಿಂತ ಎರಡು ದಿನ ಮುಂಚೆ ಮಹೇಂದ್ರ ತಮ್ಮಣ್ಣವರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಚುನಾವಣೆಯಲ್ಲಿ ಅವರ ಸಂಬಂಧಿ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಮಾಡಿದ್ದಾರೆ.

ಕುಡಚಿಯಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿರ ಮತಗಳು ಬಂದಿವೆ.ಮಹೇಂದ್ರ ತಮ್ಮಣ್ಣವರ ತಾಕತ್ತು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಯಾವ ನಾಯಕರನ್ನು ತುಳಿಯುವ ಪ್ರಯತ್ನ ಮಾಡ್ತಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಬೇರೆಯವರ ಪರವಾಗಿ ಮಹೇಂದ್ರ ತಮ್ಮಣ್ಣವರ ಕೆಲಸ ಮಾಡಿದ್ದಾರೆ.

ಮಹೇಂದ್ರ ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ.ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೇ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ ಎಂದ ಜಾರಕಿಹೊಳಿ ಶಾಸಕ ತಮ್ಮನ್ನವರಗೆ ತಿರುಗೇಟು ನೀಡಿದ್ದಾರೆ.

ವರದಿ : ರಾಹುಲ್  ಮಾದರ 

Read All News